|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಾವು ಪೃಥ್ವಿಯ ಮಕ್ಕಳು. ಆ ಪೃಥ್ವಿಯ ಗತಿಗೆ ಹೊಂದಿಕೊಳ್ಳಬೇಕು. ಶರದ್ಶಿಶಿರಗಳು ಎಷ್ಟು ಅಗತ್ಯವೋ, ಗ್ರೀಷ್ಮ ವಸಂತಗಳು ಅಷ್ಟೇ ಅಗತ್ಯ, ಅನಿವಾರ್ಯ. ಇದು ಪ್ರಕೃತಿಯ ಸಂವಿಧಾನ. ಆದ್ದರಿಂದ ಈ ಭೂಮಿಯ ಬದುಕಿನ ನಿರಂತರತೆಯೊಂದಿಗೆ ಬೆರತು ಹೋಗಬೇಕು. “ನಿಮ್ಮನ್ನು ಪ್ರೀತಿಸೋ ಸಹನಾ ಏನಾಗಬೇಕು. ನಮ್ಮಿಬ್ಬರ ಮದುವೆ ತೀರಾ ಅನಿರೀಕ್ಷಿತ. ಇದೊಂದು ಆಕಸ್ಮಿಕವೆಂದು ಮರೆತುಬಿಡೋಣ” ಕಾದಂಬರಿಯ ಒಂದು ಪಾತ್ರವಾದ ಭಾರತಿಯ ಮಾತು.
ಸುಧಾಕರನ ಮಾತು ಅಷ್ಟೇ ತೀಕ್ಷ್ಣವಾಗಿತ್ತು. “ಅವೆಲ್ಲ ಅಷ್ಟು ಸುಲಭಾನಾ? ಅಗ್ನಿಸಾಕ್ಷಿಯಾಗಿ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿ ನನ್ನವಳನ್ನಾಗಿ ಮಾಡಿಕೊಂಡಿದ್ದೇನೆ. ಅನಿರೀಕ್ಷಿತವೋ, ಆಕಸ್ಮಿಕವೋ, ಮನಃಪೂರ್ತಿಯಾಗಿ ನಿನ್ನ ಜೊತೆ ಸಪ್ತಪದಿಗಳನ್ನು ತುಳಿದು ವಾಗ್ದಾನ ಮಾಡಿದ್ದೀನಿ. ಅದಕ್ಕೆ ಬದ್ಧನಾಗಿರುವುದು ನನ್ನ ಕರ್ತವ್ಯ.”
ಬದುಕಿನ ಬದ್ಧತೆಯ ಬಗ್ಗೆ ಅಚಲವಾದ ನಂಬಿಕೆ ಅನಿವಾರ್ಯವಾಗಿ ಬಿಡುತ್ತೆ. ಕಾದಂಬರಿಯ ಪ್ರತಿ ಪಾತ್ರವು ಅದನ್ನೇ ಹೇಳುತ್ತದೆ.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|