|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಾಲಕಿ ಈಡಾ ಸ್ಕಡರ್ ‘ಅಪ್ಪ ನನಗೆ ಇನ್ನಷ್ಟು ಬ್ರೆಡ್ ಬೇಕು‘ ಎಂದಾಗ ‘ಇವತ್ತು ಇಲ್ಲ ಮರಿ‘ ಎನ್ನುವ ಅಮ್ಮ, ಬುಟ್ಟಿಯ ತುಂಬಾ ಬ್ರೆಡ್ ತಂದು ಮನೆಯ ಹಿಂಬಾಗಿಲನ್ನು ತೆಗೆದು ಉರಿ ಬಿಸಿಲಲ್ಲಿ ಕಾದು ಕಪ್ಪಾದ ಮಕ್ಕಳು ‘ಪಸಿ ಪಸಿ‘ ಎಂದು ಈಡಾಳ ಸ್ಕರ್ಟನ್ನು ಜಗ್ಗಿದಾಗ ಹಸಿವಿನ ಭೀಕರ ದರ್ಶನವಾಗುತ್ತದೆ. ಪ್ರತಿಷ್ಠಿತ ಕುಂಟುಂಬದ ಬ್ರಾಹ್ಮಣನೊಬ್ಬನು ‘ಕ್ಷೌರಿಕನ ಮಡದಿಯ ಕೈಯಿಂದ ಹೆರಿಗೆಯಾಗುತ್ತಿಲ್ಲ‘ ಎಂದಾಗ, ಈಡಾ ವೈದ್ಯರಾದ ತನ್ನ ತಂದೆಯನ್ನು ಕರೆದೊಯ್ಯುವಂತೆ ಹೇಳಿದಾಗ ‘ಏನು ಬ್ರಾಹ್ಮಣರ ಮನೆಗೆ ಓರ್ವ ಪರಪುರುಷ ಬಂದು ನನ್ನ ಹೆಂಡತಿಯನ್ನು ನೋಡುವುದೆ? ಅದಕ್ಕಿಂತ ಅವಳು ಸತ್ತು ಹೋಗುವುದು ಮೇಲು‘ ಎಂದು ಗುಡುಗುತ್ತಾನೆ. ಹಲವು ಗಂಟೆಗಳ ಕಾಲ ಹೋರಾಡಿ ಮುಸ್ಲಿಂ ತಾಯಿ-ಮಗುವನ್ನು ಬದುಕಿಸಿದ ಕ್ಷಣ! ಸಂಭ್ರಮವು ಆರಂಭವಾಗುವ ಮೊದಲೆ ಹೆಣ್ಣುಮಗುವಿನ ಮುಖಕ್ಕೆ ದಿಂಬನ್ನು ಒತ್ತಿ ಕೊಲ್ಲುವ ಅಜ್ಜಿಯ ಪ್ರಯತ್ನ! ಡಾ. ಈಡಾ ಸೋಫಿಯ ಸ್ಕಡರ್ ರೋಗಗಳೊಡನೆ ಮಾತ್ರವಲ್ಲ, ಭಾರತೀಯ ಬಡತನ ಹಾಗೂ ಮೂಢನಂಬಿಕೆಗಳ ವಿರುದ್ಧ ಕೂಡ ಹೋರಾಡಿದರು!
|
ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|