|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಾಚೀನ ಕಾಲದಿಂದಲೂ ಭಾರತವು ಗಣಿತ ವಿಜ್ಞಾನದಲ್ಲಿ ತುಂಬ ಮುಂದುವರಿದಿದ್ದ ಬಗ್ಗೆ ಸಾಕಷ್ಟು ಪುರಾವೆಗಳಿವೆ. ‘ಲೀಲಾವತಿ’ ಎಂಬ ಗ್ರಂಥವು ಅಂದಿನಿಂದಲೂ ಪಾಶ್ಚಾತ್ಯ ಗಣಿತಜ್ಞರ ಗಮನ ಸೆಳೆದಿತ್ತು. ಸಂಖ್ಯಾ ಪದ್ಧತಿ ಬೆಳೆದದ್ದು ಭಾರತದಲ್ಲಿ ಮೊದಲು ಎಂದೂ ಹೇಳಲಾಗಿದೆ. ಯಾವುದೇ ವಿಜ್ಞಾನ ಶಾಖೆ ಗಣಿತವನ್ನು ಬಿಟ್ಟು ಮುಂದುವರಿಯುವಂತಿಲ್ಲ. ಅಂಕೆ ಸಂಖ್ಯೆಗಳಿದ್ದದೇ ಯಾವುದೇ ಲೆಕ್ಕಾಚಾರ ಸಾಧ್ಯವಿಲ್ಲ. ನಮ್ಮ ಪ್ರಾಚೀನ ಸಂಖ್ಯಾ ಪದ್ಧತಿ ಹೇಗಿತ್ತು? ರೇಖಾಗಣಿತದಲ್ಲಿ ಭಾರತದ ಪಾಂಡಿತ್ಯ ಏನು? ಇನ್ನಿತರ ದೇಶಗಳ ವಿಜ್ಞಾನಿಗಳು ಬೆರಗಾಗುವಂತಹ ಮಾಹಿತಿಗಳು ಭಾರತೀಯ ಸಂಖ್ಯಾ ಪದ್ಧತಿಯಲ್ಲಿದ್ದುವೆ? ವಿವರಗಳಿಗೆ ಈ ಪುಸ್ತಕವನ್ನು ಅವಶ್ಯ ಓದಿ.
|
ಡಾ. ಬಾಲಚಂದ್ರ ರಾವ್ ಎಸ್ ಅವರು ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರು. ಈಗ ಬೆಂಗಳೂರಿನ ಭಾರತೀಯ ವಿದ್ಯಾಭವನದ‘ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ‘ದ ಗ್ಪುರವ ನಿರ್ದೇಶಕರಾಗಿದ್ದಾರೆ. ಗಣಿತ ಮತ್ತು ಖಗೋಳ ವಿಜ್ಞಾನ ಹಾಗೂ ವೈಚಾರಿಕತೆಗೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ.
|
|
| |
|
|
|
|
|
|
|
|
|