|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೯೮ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಬಿ.ಸಿ.ರಾಮಚಂದ್ರ ಶರ್ಮರು ನವ್ಯಪಂಥದ ವಿಶಿಷ್ಟ ಕವಿ, ಕಥೆಗಾರ, ನಾಟಕಕಾರ ಮತ್ತು ಅನುವಾದಕರಾಗಿ ಹೆಸರಾಗಿದ್ದಾರೆ; ನವ್ಯಪಂಥದಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯವನ್ನು ಮೆರೆದವರೂ ಆಗಿದ್ದಾರೆ. ಈ ಶತಮಾನದ ಪ್ರಮುಖ ಆಂಗ್ಲ ಕವಿಗಳ ನೂರು ಕವಿತೆಗಳನ್ನು ಕನ್ನಡಕ್ಕೆ ತಂದಿರುವಂತೆಯೇ, ಮಾಸ್ತಿ ಮತ್ತು ಚಿತ್ತಾಲರ ಕೆಲವು ಕಥೆಗಳನ್ನು ಹಾಗೂ ಮಾಸ್ತಿ ಮತ್ತು ಕುವೆಂಪು ಅವರ ಕಾದಂಬರಿಗಳನ್ನು ಇಂಗ್ಲಿಷ್ಗೆ ಅನುವಾದಿಸುವ ಮಹತ್ವದ ಕಾರ್ಯವನ್ನೂ ಮಾಡಿದ್ದಾರೆ. ಕನ್ನಡದ ಮಹತ್ವವನ್ನು ಹೀಗೆ ಜಾಗತಿಕ ಮಟ್ಟದಲ್ಲಿ ವಿಸ್ತರಿಸಿರುವ ವಿರಳ ಸಾಹಿತಿಗಳಲ್ಲಿ ಅವರೂ ಒಬ್ಬರಾಗಿದ್ದಾರೆ.
|
| |
|
|
|
|
|
|
|
|
|