|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
392 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
176881 |
ರಮಣ ಮಹರ್ಷಿ ದಕ್ಷಿಣ ಭಾರತದ ಅರುಣಾಚಲದಲ್ಲಿ ಪ್ರಕಟವಾದ ಆಧ್ಯಾತ್ಮಿಕ ಜ್ಯೋತಿ. ಹದಿನಾರನೆಯ ವಯಸ್ಸಿನಲ್ಲಿಯೇ ಆಶ್ಚರ್ಯಕರ ಅನುಭವಕ್ಕೆ ಒಳಗಾಗಿ ತನಗೆ ತಿಳಿಯದ ಅವ್ಯಕ್ತದ ಕರೆಗೆ ಓಗೊಟ್ಟು ಅವರು ಮನೆ ತೊರೆದರು. ಲೌಕಿಕ ಬದುಕನ್ನು ಬಿಟ್ಟುಕೊಟ್ಟು ಅಲೌಕಿಕದ ನೆಲೆಗೆ ತಲುಪಿದ ಅವರು ಐವತ್ತು ವರ್ಷಗಳ ದೀರ್ಘಕಾಲ ಅರುಣಾಚಲದಲ್ಲಿಯೇ ಉಳಿದು ತಪಸ್ಸು ಮತ್ತು ಲೋಕಾನುಗ್ರಹ ಕಾರ್ಯಗಳಲ್ಲಿ ಮಗ್ನರಾದರು.
ಅವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಮಂದಿ. ಭಾರತವೇ ಅಲ್ಲದೆ ಪಾಶ್ಚಾತ್ಯ ದೇಶಗಳಿಂದಲೂ ನೂರಾರು ಜನ ಸಹಸ್ರಗಟ್ಟಲೆ ಮೈಲಿ ಪ್ರಯಾಣಮಾಡಿ ಅವರನ್ನು ಕಾಣಲು ಅರುಣಾಚಲಕ್ಕೆ ಬಂದರು. ಅವರಲ್ಲಿ ಕೆಲವರು ಅಲ್ಲಿಅಯ ರಮಣಾಶ್ರಮದಲ್ಲಿಯೇ ನೆಲೆಸಿದರು. ಪಾಲ್ ಬ್ರಂಟನ್, ಮೇಜರ್ ಚ್ಯಾಡ್ವಿಕ್, ಆರ್ಥರ್ ಆಸ್ಟೋರ್ನ್, ಎಸ್. ಎಸ್. ಕೊಹೆನ್, ಹಂಫ್ರೀಸ್, ಹಫೀಜ್, ಕಾವ್ಯಕಂಠ ಗಣಪತಿಮುನಿ ಮೊದಲಾದ ಅನೇಕರು ಅವರ ಸನ್ನಿಧಿಯಲ್ಲಿ ದೈವಿಕ ಶಾಂತಿಯನ್ನು ಮತ್ತು ಅವರ ವ್ಯಕ್ತಿತ್ವದ ನಿಗೂಢ ಮಹಿಮೆಯನ್ನು ಅನುಭವಿಸಿದರು. ಅದರಲ್ಲಿ ಅನೇಕರು ಆ ಬಗ್ಗೆ ಬರೆದರು. ಆ ಜಾತಿ ಈ ಜಾತಿ ಎನ್ನದೆ, ಪುರುಷರು ಸ್ತ್ರೀಯರು ಮಕ್ಕಳೆ ಎನ್ನದೆ ತಮ್ಮಲ್ಲಿಗೆ ಬಂದವರಿಗೆಲ್ಲ ಮಹರ್ಷಿಧ್ಯಾತ್ಮ ಅಮೃತದ ದಿವ್ಯ ಸಿಂಚನ ಮಾಡಿದರು. ಬಡವರು ದೀನರು ದಲಿತರಂತೆಯೇ ಡಾ. ರಾಜೇಂದ್ರಪ್ರಸಾದ್, ಡಾ. ರಾಧಾಕೃಷ್ಣನ್, ರಾಜಾಜಿ, ಮೊರಾರ್ಜಿ ದೇಸಾಯಿ, ಚಿನ್ಮಯಾನಂದ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ - ಇಂಥ ಪ್ರಸಿದ್ಧರು ಅವರ ಅನುಗ್ರಹ ಪಡೆಯಲು ರಮಣಾಶ್ರಮಕ್ಕೆ ಬಂದರು. ಪಶು ಪಕ್ಷಿ ಜಗತ್ತನ್ನು ಸಹ ರಮಣರು ಪ್ರೀತಿಯಿಂದ ಕಂಡರು.
ಕನ್ನಡದಲ್ಲಿ ರಮಣರನ್ನು ಕುರಿತು ಬಂದಿರುವ ಸ್ವತಂತ್ರ ಬರೆಹ ತೀರ ಕಡಿಮೆ. ಈಗ ಕನ್ನಡದ ಪ್ರಖ್ಯಾತ ಲೇಖಕರಾದ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಭಗವಾನ್ ರಮಣ ಮಹರ್ಷಿಗಳನ್ನು ಕುರಿತು ಈ ಗ್ರಂಥ ರಚಿಸಿದ್ದಾರೆ.
|
| |
|
|
|
|
|
|
|
|
|