|
|
|

| Rs. 175 | 10% |
Rs. 158/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಎ ಕೆ ರಾಮಾನುಜನ್ ಹೇಳಿದಂತೆ ಕಣ್ಣೆದುರಿಗಿರುವುದನ್ನು ಕಾಣುವುದಕ್ಕೂ ಅದೃಷ್ಟ ಬೇಕು. ಛಾಯಾಚಿತ್ರಗಾರನಿಗೆ ಈ ಮಾತು ಇನ್ನಷ್ಟು ಚೆನ್ನಾಗಿ ಒಪ್ಪುತ್ತದೆ. ಬದುಕಿನ ಅನಂತ ಕ್ಷಣಗಳಲ್ಲಿ ದಿಢೀರನೆ ಸಿಕ್ಕಿಬಿಡುವ ಕೆಲವು ಅಮೂಲ್ಯ ಹಾಗೂ ಸುಂದರ ಫ್ರೇಮ್ಗಳನ್ನು ಸೆರೆಹಿಡಿಯಲು ಸಾಧ್ಯವಾಗುವುದು ಅಂಥ ಅದೃಷ್ಟದಿಂದಲೇ. ಇದು ಭಾವವಿನಯದ ರೂಪವೂ ಹೌದು. ನಿಸರ್ಗವೆಂಬುದು ಒಂದು ಅಕ್ಷಯ ಚಿತ್ರಕೂಟ. ತೆಗೆದಷ್ಟೂ ಕೌತುಕಮಯ ದೃಶ್ಯಗಳು ಮೂಡುತ್ತಲೇ ಇರುತ್ತವೆ. ಹವ್ಯಾಸಿ ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನರಿಗೆ ಆ ಹಾದಿಯಲ್ಲಿ ಎದುರಾದ ಹಕ್ಕಿ, ಹೂವು, ಚಿಟ್ಟೆ, ಕೀಟಗಳನ್ನೆಲ್ಲ ಈ ಪುಸ್ತಕದಲ್ಲಿ ನೀವು ಭೇಟಿಯಾಗಬಹುದು. ಅವುಗಳ ಕತೆಯನ್ನೂ ಕೇಳಬಹುದು. ಥಟ್ಟನೆ ಪ್ರತ್ಯಕ್ಷವಾಗಿ ಸಟ್ಟನೆ ಅಂತರ್ಧಾನವಾಗುವ ಈ ಅತಿಥಿಗಳ ಚಿತ್ರಬಂಧನ ಸುಲಭವಲ್ಲ. ಅವು ಸೂಕ್ತ ಬೆಳಕಿಲ್ಲದಾಗಲೋ, ಅಂದಗೆಡಿಸುವ ಹಿನ್ನೆಲೆಯಲ್ಲಿಯೋ, ಕ್ಯಾಮೆರದಲ್ಲಿ ಬ್ಯಾಟರಿ ಖಾಲಿಯಾದಾಗಲೋ ಮುಖ ತೋರಿ ಕಣ್ಣು ಮಿಟುಕಿಸುವುದೇ ಹೆಚ್ಚು. ತಾಳ್ಮೆಯಿಂದ ಇವನ್ನೆಲ್ಲ ಸಹಿಸಿಕೊಂಡು ಚೆಂದದ ಚಿತ್ರವೊಂದನ್ನು ಹಿಡಿಯುವುದು ಒಂದು ಪುಟ್ಟ ತಪಸ್ಸೆ! ಇದು ಮಲ್ಲಿಕಾರ್ಜುನರ ಕಣ್ಣು ಹಾಗೂ ಮನಸ್ಸಿಗೆ ಒಲಿದಿದೆ.
|
ಡಿ. ಜಿ. ಮಲ್ಲಿಕಾರ್ಜುನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದವರು. ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರರಾದ ಇವರ ಹವ್ಯಾಸಗಳು ಛಾಯಾಗ್ರಹಣ ಮತ್ತು ಬರಹ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ, ಲಂಡನ್ನಿನ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯಿಂದ ಮನ್ನಣೆ, ಪ್ಯಾರಿಸ್ನಿಂದ ಇಂಟರ್ ನ್ಯಾಷನಲ್ ಡಿ. ಲ. ಆರ್ಟ್ ಫೋಟೋಗ್ರಫಿಕ್ ವಿಶೇಷ ಮನ್ನಣೆ ಪಡೆದ ಇವರ ಛಾಯಾಚಿತ್ರಗಳು ಹಲವು ಕಡೆ ಪ್ರದರ್ಶಿಸಲ್ಪಟ್ಟಿವೆ. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿರುವ ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರು, ರೆಡ್ ಕ್ರಾಸ್ ಸೊಸೈಟಿ ಆಜೀವ ಸದಸ್ಯ ಹಾಗೂ ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ.
|
|
| |
|
|
|
|
|
|
|
|
|