|
|
|

|
Rs. 480 10% |
|
Rs. 432/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪುಸ್ತಕದಲ್ಲಿಯ ರಾಮಾನುಜನ್ ಕಥೆಯು, ಒಬ್ಬ ಸಾಮಾನ್ಯವಾದ, ಅರ್ಥವ್ಯಾಪ್ತಿಗೆ ಸಿಲುಕದ, ಮೇಧಾವಿಯ ಹಾಗೂ ಸರಳಜೀವಿಯ ಒಂದು ಕಥೆ. ಇದು, ಪಾಶ್ಚಿಮಾತ್ಯ ದೇಶಗಳ ಹಾಗೂ ಭಾರತದ ಸಂಪ್ರದಾಯಗಳ ಜಗ್ಗಾಟದ ಕಥೆ-ರಾಮಾನುಜನ್ ಬೆಳೆದ ದಕ್ಷಿಣ ಭಾರತದ ಕುಂಭಕೋಣದ ಸಾರಂಗಪಾಣಿ ಸನ್ನಿಧಿ ರಸ್ತೆಯ ಸಾಧಾರಣ ಪ್ರಪಂಚವು ಒಂದೆಡೆಯಾದರೆ, ಝಗಝಗಿಸಿ ಬೀಗುತ್ತಿದ್ದ ಕೇಂಬ್ರಿಡ್ಜ್ ಇನ್ನೊಂದೆಡೆ. ತಾರ್ಕಿಕ ನಿಲುವುಗಳ ಆಧಾರದ ಮೇಲೆಯೇ ನಿಂತ ಪಾಶ್ಚಿಮಾತ್ಯ ಗಣಿತ ಪರಂಪರೆ ಒಂದು ಕಡೆಯಾದರೆ, ಅದಕ್ಕೆ ಸವಾಲಾಗಿ ಪೂರ್ವ-ಪಶ್ಚಿಮಗಳೆರಡನ್ನೂ ಸಮಾನವಾಗಿ ಬೆರಗುಗೊಳಿಸಿದ ರಾಮಾನುಜನ್ ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆ ಇನ್ನೊಂದು ಕಡೆ. ಅಗಾಧ ಪ್ರತಿಭೆಯೊಂದನ್ನು ಗುರುತಿಸಿದ ನಂತರ ಮುಂದಿನ ಕಾರ್ಯ ಏನು ಎಂಬುದರ ಬಗ್ಗೆಯೂ ಈ ಕಥೆ ತಿಳಿಸುತ್ತದೆ.
|
| Reviews | ಅತ್ಯದ್ಭುತ!
| ವಿಶ್ವ ಶ್ರೇಷ್ಠ ಗಣಿತ ಮೇಧಾವಿ ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್ ರವರ ಹೆಸರನ್ನು ಯಾರು ಕೇಳಿಲ್ಲ ಹೇಳಿ? ಅವರ ಜೀವನದ ಕುರಿತು ನಾವೆಲ್ಲರೂ ಅಲ್ಲಿ-ಇಲ್ಲಿ, ಅಲ್ಪ-ಸ್ವಲ್ಪ ಕೇಳಿದ್ದೇವೆ ಹಾಗೂ ಓದಿದ್ದೇವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಾಬರ್ಟ್ ಕಾನಿಗೆಲ್ ಎಂಬ ವಿಜ್ಞಾನ ಬರಹಗಾರರು ರಾಮಾನುಜನರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಬರೆದು “The Man Who Knew Infinity : A Life of the Genius Ramanujan” ಎಂಬ ಶೀರ್ಷಿಕೆಯಡಿ ಪುಸ್ತಕವನ್ನು ಹೊರತಂದರು. ಕಳೆದ ವರ್ಷದ ಡಿಸೆಂಬರ್ ಮಾಸದಲ್ಲಿ ಆ ಪುಸ್ತಕವನ್ನು ಬೆಂಗಳೂರಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಸೆಂಟರ್ ಫಾರ್ ಅಪ್ಲಿಕೆಬಲ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಪ್ರಾಧ್ಯಾಪಕರಾದ ಸಿ.ಎಸ್. ಅರವಿಂದರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಪುಸ್ತಕ ಶೀರ್ಷಿಕೆಯೇ “ಅನಂತದ ಒಡನಾಟದಲ್ಲಿ ಅರಳಿದ ಅಸಾಧಾರಣ ಗಣಿತ ಪ್ರತಿಭೆ ರಾಮಾನುಜನ್”.1
ಲೇಖಕರೇ ಹೇಳುವಂತೆ ಈ ಪುಸ್ತಕದಲ್ಲಿಯ ರಾಮಾನುಜನ್ ಕಥೆಯು, ಒಬ್ಬ ಸಾಮಾನ್ಯನಾದ, ಅರ್ಥವ್ಯಾಪ್ತಿಗೆ ಸಿಲುಕದ, ಮೇಧಾವಿಯ ಹಾಗೂ ಸರಳಜೀವಿಯ ಒಂದು ಕಥೆ. ಇದು, ಪಾಶ್ಚಿಮಾತ್ಯ ದೇಶಗಳ ಹಾಗೂ ಭಾರತದ ಸಂಪ್ರದಾಯಗಳ ಜಗ್ಗಾಟದ ಕಥೆ-ರಾಮಾನುಜನ್ ಬೆಳೆದ ದಕ್ಷಿಣ ಭಾರತದ ಕುಂಭಕೋಣದ ಸಾರಂಗಪಾಣಿ ಸನ್ನಿಧಿ ರಸ್ತೆಯ ಸಾಧಾರಣ ಪ್ರಪಂಚವು ಒಂದೆಡೆಯಾದರೆ, ಝಗಝಗಿಸಿಬೀಗುತ್ತಿದ್ದ ಕೇಂಬ್ರಿಜ್ ಇನ್ನೊಂದೆಡೆ. ತಾರ್ಕಿಕ ನಿಲುವುಗಳ ಆಧಾರದ ಮೇಲೆಯೇ ನಿಂತ ಪಾಶ್ಚಿಮಾತ್ಯ ಗಣಿತ ಪರಂಪರೆ ಒಂದು ಕಡೆಯಾದರೆ, ಅದಕ್ಕೆ ಸವಾಲಾಗಿ ಪೂರ್ವ-ಪಶ್ಚಿಮಗಳೆರಡನ್ನೂ ಸಮನಾಗಿ ಬೆರಗುಗೊಳಿಸಿದ ರಾಮಾನುಜನ್ ನ ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆ ಇನ್ನೊಂದು ಕಡೆ. ಅಗಾಧ ಪ್ರತಿಭೆಯೊಂದನ್ನು ಗುರುತಿಸಿದ ನಂತರ ಮುಂದಿನ ಕಾರ್ಯ ಏನು ಎಂಬುದರ ಬಗ್ಗೆಯೂ ಈ ಕಥೆ ತಿಳಿಸುತ್ತದೆ. ಕನ್ನಡದಲ್ಲಿ ರಾಮಾನುಜನ್ ರ ಸಂಪೂರ್ಣ ಜೀವನ ಚರಿತ್ರೆ ಹೊರಬಂದಿರುವುದು ನಮ್ಮ ಭಾಗ್ಯ. ಈ ಪುಸ್ತಕವು ಮಹಾನ್ ಪ್ರತಿಭೆ ರಾಮಾನುಜನ್ ರ ಸಮಗ್ರ ಜೀವನದ ಕಥೆಯೊಂದಿಗೆ ನಮ್ಮ ಜೀವನಕ್ಕೂ ಒಂದು ಸ್ಫೂರ್ತಿ ನೀಡುತ್ತದೆ.
|
| |
|
|
|
|
|
|
|