
| Rs. 75 | 10% |
Rs. 68/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ 1996 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಾನಸಿಕ ಒತ್ತಡ, ಮನಃಕ್ಲೇಶ, ಬೇಸರ, ದುಃಖ, ಭಯ, ಕೋಪ, ಅಸಹಾಯಕತೆಗಳಿಗೆ ಒಳಗಾದವರು ಯಾರಿದ್ದಾರೆ? ಆಬಾಲವೃದ್ಧರಾದಿಯಾಗಿ, ಎಲ್ಲ ವರ್ಗದವರು, ಎಲ್ಲ ವೃತ್ತಿಯಲ್ಲಿರುವವರು, ಸ್ತ್ರೀಪುರುಷರು, ಬಡವ ಶ್ರೀಮಂತರು ಇವಕ್ಕೆ ಹೊರತಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲದೆ, ಎಲ್ಲ ಭೋಗಭಾಗ್ಯ ಇದ್ದರೂ ಅನುಭಾವಿಸಲಾಗದೇ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಕಷ್ಟ ಬಂದಾಗ, ಯಾರಾದರೂ ಪಕ್ಕದಲ್ಲಿ ಕುಳಿತು, ಬೆನ್ನು ಸವರಿ ಕೈಹಿಡಿದು ‘ನಾನಿದ್ದೇನೆ ಹೆದರಬೇಡ’ ಎಂದು ಹೇಳುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.ಆತ್ಮೀಯತೆಯಿಂದ, ಸಹಾನುಭೂತಿಯಿಂದ ಕಷ್ಟ ಸುಖವನ್ನು ವಿಚಾರಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಜನಸಾಗರದ ನಡುವೆ ಬದುಕುತ್ತಿದ್ದರೂ ನಾವು ಒಬ್ಬೊಬ್ಬರೂ ಒಂಟಿ ದ್ವೀಪ. ಇದರ ಪರಿಣಾಮ, ಒಂಟಿತನ, ತಬ್ಬಲಿತನ, ಅತೃಪ್ತಿ, ನಿಟ್ಟುಸಿರು, ರೋಗರುಜಿನಗಳು, ಅಕಾಲ ಮುಪ್ಪು ಮತ್ತು ಮೃತ್ಯು. ಆಪ್ತಸಲಹೆ ಮತ್ತು ಸಮಾಧಾನ - ಈ ನಿರಾಶೆಯ ಮೋಡಗಳ ಅಂಚಿನ, ಕೋಲ್ಮಿಂಚು, ಅದು ದುಃಖಿತರಿಗೆ, ಸಂಕಟದಲ್ಲಿರುವವರಿಗೆ, ಆತಂಕ, ಬೇಸರಗಳಿಂದ, ಸೋಲು, ನಿರಾಶೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ, ದೈಹಿಕ-ಮಾನಸಿಕ ರೋಗಗಳಿಗೆ ತುತ್ತಾದವರಿಗೆ ಸಂಜೀವಿನಿ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|