|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಹಮತ್ ತರೀಕೆರೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೦ನೆಯ ಸಾಲಿನ ಪ್ರಶಸ್ತಿಯನ್ನು ಗಳಿಸಿರುವ ವಿದ್ವಾಂಸರು. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಅವರು ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಕೈಗೊಂಡು ಸಾಂಸ್ಕೃತಿಕ ಮುಖಾಮುಖಿಯ ಹೊಸ ಆಯಾಮಗಳನ್ನೇ ಮೂಡಿಸಿದ್ದಾರೆ. ಸಂಶೋಧನೆ, ಸಂಪಾದನೆ, ವಿಮರ್ಶೆಯ ಕ್ಷೇತ್ರಗಳಲ್ಲಿ ಹೊಸ ಚಿಂತನೆಗಳನ್ನು ಮೂಡಿಸಿದ ಹಿರಿಮೆಯೂ ಅವರದಾಗಿದೆ. ಕರ್ನಾಟಕದ ಸೂಫಿಗಳು, ಕರ್ನಾಟಕದ ನಾಥಪಂಥ - ಇಂಥ ವಿಷಯಗಳನ್ನು ಆಯ್ದುಕೊಂಡು ತಲಸ್ಪರ್ಶಿ ಅಧ್ಯಯನದ ಮತ್ತು ಮೌಲಿಕ ಸಂಶೋಧನೆಯ ಪಕ್ವಫಲವನ್ನೂ ಅವರು ನೀಡಿದ್ದಾರೆ. ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಕ್ಷೇತ್ರಗಳಿಗೆ ಅವರು ನೀಡುತ್ತ ಬಂದಿರುವ ಕೊಡುಗೆ ವಿಶೇಷ ಮಹತ್ವದ್ದಾಗಿದೆ. ಒಟ್ಟಿನಲ್ಲಿ, ರಹಮತ್ ತರೀಕೆರೆ ಅವರು ಹೊಸ ಚಿಂತನೆಯ ಹರಿಕಾರರಾಗಿ ಮುನ್ನಡೆಯುತ್ತಿದ್ದಾರೆ. ಹೊಸ ತಲೆಮಾರಿನ ಚಿಂತನೆಯ ಬಗ್ಗೆ ನಂಬಿಕೆಯನ್ನು ಮೂಡಿಸಿವಂಥ ವಿಶಿಷ್ಟ ಲೇಖಕರಾಗಿ ಹೊರಹೊಮ್ಮಿದ್ದಾರೆ.
|
ಡಾ|| ರಂಗನಾಥ ಕಂಟನಕುಂಟೆಯವರು ತರುಣ ಪೀಳಿಗೆಯ ಭರವಸೆಯ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಮೂಲತಃ ಅಧ್ಯಾಪಕರಾಗಿರುವ ಅವರ ಸಾಹಿತ್ಯಕ ಮತ್ತು ಸಾಮಾಜಿಕ ಕಾಳಜಿಗಳು ವಿಶಿಷ್ಟವಾಗಿವೆ. ವಿಮರ್ಶೆ ಮತ್ತು ಸಂಶೋಧನೆ ಇವರ ವಿಶೇಷ ಕಾಳಜಿಗಳ ಕ್ಷೇತ್ರಗಳಾದರೂ ಕವನ ಮತ್ತು ನಾಟಕಗಳ ಕ್ಷೇತ್ರಗಳಿಗೂ ಗಮನಾರ್ಹ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ರಹಮತ್ ತರೀಕೆರೆ ಅವರನ್ನು ಕುರಿತಂತೆ ವಿಶೇಷ ಅಧ್ಯಯನವನ್ನು ನಡೆಸಿರುವ ಇವರು ಈ ಕೃತಿಯಲ್ಲಿ ತಮ್ಮ ನಿಶಿತವಾದ ಹಾಗೂ ವಸ್ತುನಿಷ್ಠವಾದ ದೃಷ್ಟಿಕೋನವನ್ನು ಮೆರೆದಿರುವಂತೆಯೇ ಆತ್ಮೀಯತೆಯನ್ನೂ ಅದರೊಂದಿಗೆ ಬೆಸೆದಿದ್ದಾರೆ.
|
|
| |
|
|
|
|
|
|
|
|
|