|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2007 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
241 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788190575515 |
ಕೋಡ್ |
: |
146678 |
‘ರಾಗ ಬೃಂದಾವನ’ ಕಾದಂಬರಿ ಓದಿದ ಓಬ್ಬ ಓದುಗರ ಪ್ರತಿಕ್ರಿಯೆ :
ಮಹಾನ್ ಗಾಯಕ ಸೈಗಾಲ್, ಅಪ್ರತಿಮ ಸಂಗೀತ ನಿರ್ದೇಶಕ ನೌಷಾದ್ ರಾಗ ಸಂಯೋಜನೆಯಲ್ಲಿ ‘ಷಹಜಹಾನ್’ ಚಿತ್ರದಲ್ಲಿ ಹಾಡಿದ ‘ಜಗ್ ದಿಲ್ ಹಿ ಟೂಟ್ ಗಯಾ, ಹಮ್ ಜೀಕೆ ಕ್ಯಾ ಕರೇಂಗೆ’ ಎನ್ನುವ ಅಮರ ಗೀತೆ. ಇನ್ನೊಂದು ವಿಸ್ಮಯ ಸಂಗತಿಯೆಂದರೆ ಸೈಗಾಲ್ ಶವಯಾತ್ರೆ ನಡೆದಾರ ರಸ್ತೆಯಲ್ಲಿ ಗೋಷ್ಟಿಗಾನವಾಗಿ ಹೊರ ಹೊಮ್ಮಿದ್ದು ‘ಜಬ್ ದಿಲ್ ಹಿ ಟೂಟ್ ಗಯಾ...’ ಭಗ್ನವಾಗಿದ್ದು ಸೈಗಾಲ್ ಹೃದಯ ಮಾತ್ರವೇ ಅಲ್ಲ. ಆ ಹಾಡಿನ ಮೋಡಿಗೆ ಒಳಗಾದ ಅಸಂಖ್ಯಾತ ಹೃದಯಗಳು ಕೂಡ. ಹಾಗೆಯೇ ಈ ಕಾದಂಬರಿ ಓದಿನ ನಡುವೆ ನನ್ನ ಹೃದಯವೂ ಭಗ್ನವಾಗಿತ್ತು. ಆದರೆ ಸುಖಾಂತವಾಗಿ ನನ್ನ ಹೃದಯದಲ್ಲಿ ರಾಗ ಮೂಡಿಸಿದೆ.
ಇಂತಹ ಹಲವಾರು ಪ್ರತಿಕ್ರಿಯೆಗಳ ಸಂಗಮ.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|