|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
5 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
208 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
180535 |
ರಹಮತ್ ಅವರಿಗೆ ಸಂಸ್ಕೃತಿಯ ಬಹುಮುಖತೆ ಹಾಗೂ ಅದರ ಅಲಕ್ಷಿತ ನೆಲೆಗಳ ಹುಡುಕಾಟದಲ್ಲಿ ತೀವ್ರ ಆಸಕ್ತಿ. ಅಷ್ಟೇ ಅಲ್ಲ, ಇದುವರೆಗೆ ಆದರ್ಶವೆಂದು ಮಂಡಿತವಾದ ಸಂಸ್ಕೃತಿ ವಿವರಗಳನ್ನು ಅವರು ನಿರಾಕರಿಸುತ್ತಾರೆ; ಹೆಚ್ಚು ಆರೋಗ್ಯಕರವಾದ ಪ್ರತಿಸಂಸ್ಕೃತಿಯ ವಿವರಗಳನ್ನು ತೋರಿಸುತ್ತಾರೆ. ಅವರ ನಿಲುವುಗಳ ಹಿಂದೆ ನೋವಿನ ನಡುವೆಯೂ ಅರ್ಥವಂತಿಕೆ ಹಾಗೂ ಅಭಿಮಾನಗಳನ್ನು ಕಾಪಾಡಿಕೊಂಡ ಜೀವನಕ್ರಮವೊಂದರ ಒತ್ತಡ, ಒತ್ತಾಸೆಗಳಿವೆ.
ತಮ್ಮ ಸಂಸ್ಕೃತಿ ಚಿಂತನೆಗೆ ಆಕಾರ ಕೊಡಲೆಂದು ಸಾಹಿತ್ಯವನ್ನೂ ವಿಮರ್ಶೆಯನ್ನೂ ಬಳಸಿಕೊಳ್ಳುವ ರಹಮತ್, ಸಾಹಿತ್ಯದ ಅನನ್ಯತೆಯನ್ನು ಅಲ್ಲಗಳೆಯುವುದಿಲ್ಲ. ಹಾಗೆಂದು ಪ್ರಾಯೋಗಿಕ ವಿಮರ್ಶೆಯ ಗೋಡೆಗಳ ನಡುವೆ ನಿರಾಳವಾಗಿ ಕೂಡುವುದೂ ಇಲ್ಲ. ಜೀವನ ಮತ್ತು ಸಾಹಿತ್ಯಗಳನ್ನು ಪರಸ್ಪರ ಒರೆಗಲ್ಲುಗಳಾಗಿ ಅವರು ಉಪಯೋಗಿಸುತ್ತಾರೆ. ತಾರುಣ್ಯದ ತೀವ್ರತೆ ಮತ್ತು ಚಿತ್ರ ತುಂಬಿದ ಭಾಷೆಗಳ ಫಲವಾದ ಆಕರ್ಷಕ ಶೈಲಿ ‘ಪ್ರತಿಸಂಸ್ಕೃತಿ’ಯ ಗುಣವಾಗಿದೆ.
|
ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|