|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ವರ್ಣಭೇದ ನೀತಿಯ ಬಗ್ಗೆ ಶಾಂತಿ ಮಾರ್ಗದಲ್ಲಿ ಹೋರಾಡಿದ ಅದ್ವಿತೀಯ ಮಾನವತಾವಾದಿ. ಮೆಂಪ್ಹಿಸ್ ನಗರದ ಮ್ಯಾಸನ್ ಟೆಂಪಲ್ ಎನ್ನುವ ಸ್ಥಳದಲ್ಲಿ 2000 ಜನರು ಸೇರಿದ್ದರು. ಮಾರ್ಟಿನ್ ಜೂನಿಯರ್ ತನ್ನ ಚಳವಳಿ, ಅದರ ಉದ್ದೇಶ, ತನ್ನನ್ನು ಕೊಲ್ಲಲು ಇದುವರೆಗೂ ನಡೆದಿರುವ ಪ್ರಯತ್ನ ಎಲ್ಲವನ್ನೂ ವಿವರಿಸಿದನು. ಭಾಷಣದ ನಂತರ ಹೊಟೇಲಿನ ಮೆಟ್ಟಿಲು ಇಳಿದು ಬರುವಾದ ಎಲ್ಲಿಂದಲೋ ಹಾರಿಬಂದ ಗುಂಡು ಮಾರ್ಟಿನ್ ಮುಖಕ್ಕೆ ಅಪ್ಪಳಿಸಿತು! ಆತನ ಜೀವವನ್ನು ತೆಗೆದುಕೊಂಡಿತು. ಜೇಮ್ಸ್ ಅರ್ಲ್ ರೇ ಎನ್ನುವ ಖೈದಿಯ ಬಂದೂಕಿನಿಂದ ಗುಂಡು ಹಾರಿತು ಎಂದರೂ ನಿಜವಾದ ಕೊಲೆಗಾರ ಯಾರು ಎನ್ನುವುದು ಕೊನೆಗೂ ಪತ್ತೆಯಾಗಲಿಲ್ಲ. ಮಾರ್ಟಿನ್ ಜೂನಿಯರ್ ಅಭಿಮಾನಿಗಳು ಭುಗಿಲೆದ್ದು ಅಮೆರಿಕಾದ್ಯಂತ ಹಿಂಸಾತ್ಮಕ ಹೋರಾಟಕ್ಕಿಳಿದರು. ಆದರೆ ಮಾರ್ಟಿನ್ ಜೂನಿಯರ್ ಮಡದಿ ಕೊರೆಟ್ಟಾ 19,000 ಹಿಂಬಾಲಕರ ಜೊತೆಯಲ್ಲಿ ಶಾಂತಿಯುತ ಮೆರೆವಣಿಗೆಯನ್ನು ಮಾಡಿದಳು. ಶವಸಂಸ್ಕಾರದಲ್ಲಿ 50,000 ಜನರು ಭಾಗವಹಿಸಿದರು. ಮಾರ್ಟಿನ್ ಜೂನಿಯರ್ ಅಮರರಾದರು.
|
ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.
|
|
| |
|
|
|
|
|
|
|
|
|