|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕ್ಷಣ ಕ್ಷಣಕ್ಕೂ ಹೊಸತನ, ಹೊಸರೂಪ, ರಚನೆ ಹಾಗೂ ಹೊಸ ನಡವಳಿಕೆಗಳನ್ನು ಪ್ರದರ್ಶಿಸಬಲ್ಲ ಪ್ರಕೃತಿ ಆಯಾ ದೇಶ, ಕಾಲಕ್ಕನುಗುಣವಾಗಿ ವಿಕಾಸ ಪಥದಲ್ಲಿ ನಡೆದು ಬಂದಿರುವುದು ಅತಿಶಯೋಕ್ತಿಯಲ್ಲ. ಜೀವಿ ವಿಕಾಸ ತಜ್ಞ ಟಿ. ಡೊಬ್ಸಾಂಸ್ಕಿ ವಿಕಾಸದ ಬೆಳಕು ಮೂಡಿಸದ ಜೀವ ವಿಜ್ಞಾನ ಅರ್ಥಹೀನ ಎನ್ನುತ್ತಾನೆ. ಪರಿಸರದ ಪರಿಕರಗಳನ್ನು ಬಳಸಿ ಸುಸ್ಥಿರ ವ್ಯವಸ್ಥೆ ಮಾಡಿಕೊಂಡಾಗ ವಿಕಾಸ ಸುಮುಖ. ಕೆಲವೊಮ್ಮೆ ಅದು ಸುದೀರ್ಘ, ಕೆಲವೊಮ್ಮೆ ಸುಳಿವಿಲ್ಲದೇ ಸುರುಟಿ ಹೋಗಬಹುದು. ವಿಕಾಸದ ಈ ನಿರಂತರ ಪಯಣದಲ್ಲಿ ಅಪಘಾತಗಳೆಷ್ಟೋ, ಪ್ರಪಾತಕ್ಕೆ ಬಿದ್ದವುಗಳೆಷ್ಟೋ ನಿಖರ ಮಾಹಿತಿಗಳಿಲ್ಲ. ಸಿಕ್ಕಷ್ಟು ಮಾಹಿತಿಗಳಿಂದ ಇಂದಿನ ಜೀವಿ ವೈವಿಧ್ಯಕ್ಕೆ ಸಾಕಷ್ಟು ಪುರಾವೆಗಳು ದೊರೆಕಿವೆ. ಆದರೂ ಅವು ಅಪೂರ್ಣವೇ. ವಿಕಾಸಕ್ಕೆ ಎಂದೂ ಪೂರ್ಣವಿರಾಮವಿಲ್ಲ. ಅದು ಸದಾ ಜರುಗುತ್ತಲೇ ಸಾಗುವುದು. ಹಿಂದೆ ಹಾಗಿತ್ತು. ಇಂದು ಹೀಗಿದೆ, ಮುಂದೆ ಹೇಗಾಗಬಹುದು ಎಂಬ ಚಿಂತನೆಯೇ ವಿಜ್ಞಾನದ ಮಾರ್ಗ. ನಮ್ಮ ಸುತ್ತಮುತ್ತಲಿನ ಹಿರಿ, ಕಿರಿ, ಸೂಕ್ಷ್ಮ ಜೀವಿಗಳ ರೂಪ, ರಚನೆ, ನಡವಳಿಕೆಗಳನ್ನು ಗಮನಿಸಿದಾಗ ವಿಕಾಸದ ಹಾದಿಯಲ್ಲಾಗಿರುವ ಹೊಂದಾಣಿಕೆ, ಬದಲಾವಣೆ ಅರಿವಾಗಬಹುದು. ನಮಗೆಷ್ಟು ತಿಳಿದಿದೆ ಎಂದು ಗೊತ್ತಾಗುವುದು ನಮ್ಮ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮತ್ತೊಬ್ಬರ ವಿಚಾರಧಾರೆಗಳನ್ನು ಕೇಳಿದಾಗ, ಪುಸ್ತಕಗಳನ್ನು ತೆರೆದು ಓದಿದಾಗ, ಚರ್ಚೆಗಳಲ್ಲಿ ಭಾಗವಹಿಸಿದಾಗ, ಇಷ್ಟೇ ಅಲ್ಲ ಏನನ್ನಾದರೂ ಬೋಧಿಸಲು ತಲೆಕೆಡಿಸಿಕೊಂಡಾಗ ಹಾಗೂ ಯಾವುದಾದರೂ ವಿಷಯದ ಬಗೆಗೆ ಬರೆಯುವ ಸಾಹಸಕ್ಕೆ ಕೈ ಹಚ್ಚಿದಾಗ, ಈ ದಿಶೆಯಲ್ಲಿ ನಡೆಸಿದ ಪ್ರಯತ್ನವೆ ಈ ಕೃತಿ.
|
ಡಾ|| ಎನ್ ಎಸ್ ಲೀಲಾ, ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವಾರು ಕೃತಿಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಸಪ್ನ ಮತ್ತು ಪ್ರಿಸಂ ಬುಕ್ ಹೌಸ್ ಪ್ರಕಟಿಸಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಞಾನವಾಣಿ ಮತ್ತು ಆಕಾಶವಾಣಿಗಳಲ್ಲಿ ಇವರ ಭಾಷಣ ಬಿತ್ತರಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ೨೦೦೨ನೇ ಸಾಲಿನ ‘ಸದೋದಿತ’ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ‘ಶಾಶ್ವತಿ’ಯಿಂದ ಇವರಿಗೆ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ೨೦೦೫ರ ‘ಅನುಪಮ ವಿಜ್ಞಾನ ಶಿಕ್ಷಕಿ’ ಪ್ರಶಸ್ತಿಯ ಭಾಜನರು. ಕರ್ನಾಟಕ ಸ್ಟೇಟ್ ವುಮೆನ್ ಎಕ್ಸಲೆನ್ಸ್ ಅವಾರ್ಡ್, ವಿಮೆನ್ ಇಂಟರ್ ನ್ಯಾಷನಲ್ ನೆಟ್ವರ್ಕ್ ವತಿಯಿಂದ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ೨೦೧೧. ಪ್ರಸ್ತುತ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಷನ್ ಸಲಹೆಗಾರರು ಹಾಗೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ಎಥಿಕಲ್ ಕಮಿಟಿ ಸದಸ್ಯರಾಗಿದ್ದಾರೆ.
|
|
| |
|
|
|
|
|
|
|
|
|