|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು‘ ವಿಜ್ಞಾನ ಪ್ರವಾಸೋದ್ಯಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಕೃತಿ. ಕನ್ನಡದ ಮಟ್ಟಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ತಂದೆ ಮಕ್ಕಳ ಜೋಡಿ. (ಎರಡನೆಯ ಜೋಡಿ ಕುವೆಂಪು ಮತ್ತು ಪೂಚಂತೇ; ಮೂರನೆಯ ಜೋಡಿ ಆದ್ಯ ರಂಗಾಚಾರ್ಯ ಮತ್ತು ಶಶಿ ದೇಶಪಾಂಡೆ. ಶಶಿಯವರ ಇಂಗ್ಲಿಷ್ ಕೃತಿಗೆ ಪ್ರಶಸ್ತಿ ದೊರೆತಿದೆ) ಸ್ವಾಮಿಯವರ ವಿಜ್ಞಾನ ಬರಹಗಳ ಹಾಗೆ ಅವರ ಸಾಹಿತ್ಯ ಬರಹಗಳೂ ಪ್ರಸಿದ್ಧ. ತಮಿಳು ಭಾಷೆಯ ಪ್ರಾಚೀನತೆಯ ‘ಕುಮರಿಕಾಂಡಂ‘ ಕಥೆ ಕಟ್ಟುವ ಇರಾವಂತಂ ಮಹಾದೇವನ್ ಹಾಗೂ ನೀಲಕಂಠ ಶಾಸ್ತ್ರಿಗಳ ವಾದವನ್ನು ಪುರಾವೆ ಸಹಿತ ಕೇವಲ ಕಲ್ಪನೆ ಎಂದು ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಬರೆದವರು ಇವರು. ‘ಬಿ.ಜಿ.ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ಕವಿಯಿದ್ದ‘ ಎನ್ನುವ ಹಾ.ಮಾ. ನಾಯಕರ ಮಾತು ಉತ್ಪ್ರೇಕ್ಷೇಯಲ್ಲ.
|
ಟಿ ಜಿ ಶ್ರೀನಿಧಿಯವರು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಿಂದ ಬಿ.ಇ. ಪದವಿ ಹಾಗೂ ಬಿಟ್ಸ್ ಪಿಲಾನಿಯಿಂದ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ತಂತ್ರಜ್ಞನಾಗಿ ಉದ್ಯೋಗ. ವಿಜ್ಞಾನ ತಂತ್ರಜ್ಞಾನ ಬರವಣಿಗೆ ಅಚ್ಚುಮೆಚ್ಚಿನ ಹವ್ಯಾಸ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಈವರೆಗೆ ಐದುನೂರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಹಲವು ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೂ ಉಂಟು. ಪುಸ್ತಕಗಳ ಸಾಲಿನಲ್ಲಿ ಇದು ಹತ್ತನೆಯದು. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಬಂದಿದೆ.
|
|
| |
|
|
|
|
|
|
|
|
|