|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬೆಂಗಳೂರು ಈಗ ಭಾರತದ ಆಸ್ತಮಾ ರೋಗದ ಕೇಂದ್ರ ಎಂದು ಹೇಳಬಹುದಾಗಿದೆ. ಆದ್ದರಿಂದ ಆಸ್ತಮಾ ರೋಗದ ಬಗ್ಗೆ ಮಾಹಿತಿ ಜನಸಾಮಾನ್ಯರಿಗೆ ಅತ್ಯಗತ್ಯವಾಗಿದೆ ಹಾಗೂ ಈ ಕಿರುಹೊತ್ತಿಗೆ ವೈಜ್ಞಾನಿಕ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಲು ಮುಂದಾಗಿದೆ. ನಮ್ಮ ಸಮಾಜದ ಇನ್ನೊಂದು ವಿಶೇಷತೆಯೆಂದರೆ ಆಧುನಿಕ ಆರೋಗ್ಯ ಮಾಹಿತಿಗಿಂತ ರೋಗದ ಬಗ್ಗೆ ಇರುವ ಮೂಡನಂಬಿಕೆಗಳ ಹೆಚ್ಚು ಪ್ರಚಲಿತವಾಗಿವೆ. ಆ ಮೂಡನಂಬಿಕೆಗಳಿಗೆ ಪುಷ್ಟಿ ಕೊಡುವ ಚಿಕಿತ್ಸಾ ಪದ್ಡತಿ ವ್ಯಾಪಕವಾಗಿದ್ದು ಅದು ಜನಸಾಮಾನ್ಯರ ಗಮನ ಸೆಳೆದಿದೆ. ಆಸ್ತಮಾ ರೋಗ ಹತೋಟಿಗೆ ವೈಜ್ಞಾನಿಕ ಮಾಹಿತಿ ಸಾಕಷ್ಟಿದ್ದು ಜನರು ಅದನ್ನು ಅರಿತುಕೊಳ್ಳಲು ಈ ಕಿರುಹಿತ್ತಿಗೆ ಪ್ರಯೋಜನವಾಗಲಿದೆ.
|
ಡಾ. ಪ್ರಕಾಶ್ ಸಿ ರಾವ್ ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತಿಯಲ್ಲಿ ತೊಡಗಿದ್ದಾರೆ. ಇವರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಪ್ರಾರಂಭಿದಿಂದಲೂ ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯ ಸಮಯದಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದರೆ.
|
|
| |
|
|
|
|
|
|
|
|
|